
ಆನೇಕಲ್ ತಾಲ್ಲೂಕಿನ ಬಿದರಗುಪ್ಪೆ ಪಂಚಾಯಿತಿ ವ್ಯಾಪ್ತಿಯ ಅರೇನೂರು ಗ್ರಾಮದಲ್ಲಿ ಡಾ. ಬಿ ಅರ್ ಅಂಬೇಡ್ಕರ್ ರವರ 134 ನೇ ಜಯಂತಿಯನ್ನು ಮಾಡಲಾಯಿತು.
ಡಾ.ಅಂಬೇಡ್ಕರ್ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಬಾಬಾ ಸಾಹೇಬರ ಪ್ರತಿಮೆಯನ್ನು ಗ್ರಾಮದ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಿ ಅಂಬೇಡ್ಕರ್ ರವರ ಗೌರವ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದ ನೇತೃತ್ವವನ್ನು ಭರತ್ ಕುಮಾರ್ , ಅಜಯ್ ಕುಮಾರ್ ಹಾಗೂ ಎ.ವಿ ಮುನಿರಾಜು ರವರು ವಹಿಸಿದ್ದರು.
ನೆರಳೂರು ಪಂಚಾಯಿತಿ ಸದಸ್ಯರಾದ ಮಂಜುಳಾರವರು ಮಾತನಾಡಿ ಅಂಬೇಡ್ಕರ್ ರವರು ಆ ಕಾಲದಲ್ಲಿಯೇ 32 ಡಿಗ್ರಿಗಳನ್ನು ಪಡೆದು ಭಾರತ ಸಂವಿಧಾನ ರಚನೆ ಮಾಡಿದ್ದಾರೆ. ಆ ಮೂಲಕ ತುಳಿತಕ್ಕೆ ಒಳಗಾದ ಪ್ರಪಂಚದ ಕಟ್ಟ ಕಡೆಯ ವ್ಯಕ್ತಿಗೂ ಸಮಾನತೆ ನೀಡಿದ ಧೀಮಂತ ನಾಯಕ , ಹಾಗಾಗಿ ದೇಶಾದ್ಯಂತ ಬಾಬಾ ಸಾಹೇಬರ ಜಯಂತಿಯ ಹಬ್ಬದ ರೀತಿ ಆಚರಣೆ ಮಾಡಲಾಗುತ್ತಿದೆ ಎಂದರು.
ದಲಿತ ಮುಖಂಡ ಎಂಸಿ ಹಳ್ಳಿ ವೇಣು ಮಾತನಾಡಿ ವರ್ಷ ಪೂರ್ತಿ ಅಂಬೇಡ್ಕರ್ ರವರ ಜನ್ಮದಿನವನ್ನ ಆಚರಣೆ ಮಾಡಲಾಗುತ್ತದೆ. ದೇಶದ ಮೆಲು ಕೀಳು ಜಾತಿ ಬೇಧಗಳನ್ನ ಹೊಗಲಾಡಿಸಿದ ಮಹಾನ್ ವ್ಯಕ್ತಿ ಅಂಬೇಡ್ಕರ್.. ಹೆಣ್ಣು ಮಕ್ಕಳನ್ನ ಗುಲಾಮರಾಗಿಸಿ, ಯಾವುದೇ ಹಕ್ಕು ನೀಡದೇ ದಾಸಿಗಳಾಗಿ ಕಾಣುತ್ತಿದ್ದ ಸಮಾಜದಲ್ಲಿ ಮಹಿಳೆಯರಿಗೆ ರಾಜಕೀಯವಾಗಿ, ಸಮಾಜಿಕವಾಗಿ ಬದುಕು ಕಟ್ಟಿಕೊಳ್ಳಲು ಕಾರಣ ಅಂಬೇಡ್ಕರ್,.. ಸಮ ಸಮಾಜದ ನಿರ್ಮಾಣಕ್ಕಾಗಿ ಇಡೀ ತಮ್ಮ ಜೀವನವನ್ನೇ ಅಂಬೇಡ್ಕರ್ ಮುಡಿಪಾಗಿಸಿದ್ದಾರೆ. ಹೀಗಾಗಿ ಅವರ ಜಯಂತಿ ಆಚರಿಸುವ ಮೂಲಕ ಪ್ರತಿ ಮನೆಯಲ್ಲೂ ಅಂಬೇಡ್ಕರ್ ರವರಿಗೆ ನಮನ ಸಲ್ಲಿಸಬೇಕಿದೆ ಎಂದರು.ಅಂಬೇಡ್ಕರ್ ಜಯಂತಿ ಅಂಗವಾಗಿ ಅಂಬೇಡ್ಕರ್ ಗೆಳೆಯರ ಬಳಗದ ವತಿಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಲಾಯಿತು.
ಇನ್ನು ಕಾರ್ಯಕ್ರಮದಲ್ಲಿ ಎ.ವಿ ಶಂಕರ್, ಎ.ವಿ ನಾರಾಯಣಸ್ವಾಮಿ, ಪ್ರಕಾಶ್, ಆನಂದ್, ಅನುಪಮ ನಾರಾಯಣಸ್ವಾಮಿ, ಎಂ ಶಂಕರ್, ಎ.ವೈ ಗೋಪಾಲ್, ಯುವರಾಜ್, ಮದನ್ ರೋಹಿತ್, ಸುಹಾಸ್, ಮೋಹನ್, ನಾಗರಾಜು, ಎ.ಜಿ ಮಹೇಂದ್ರ,ಶಶಿಧರ್ ಎ,ಎಂ ಮುರಳಿ, ಶಶಿಕುಮಾರ್ ಎಂ.ಪ್ರಮೋದ್ ಕುಮಾರ್, ಎಂ.ಮಂಜುನಾಥ,ಕಾಂತರಾಜು,ವೆಂಕಟೇಶ್ ಸೇರಿದಂತೆ ಅರೇನೂರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹಾಜರಿದ್ದರು.