
ಗ್ರಾಮ ಪಂಚಾಯಿತಿಗಳಲ್ಲಿನ ನಿರ್ಲಕ್ಷತೆ, ಭ್ರಷ್ಠಚಾರವನ್ನು ಖಂಡಿಸಿ ಮತ್ತು ನಾಗರೀಕ ಸೌಲಭ್ಯಗಳಿಗಾಗಿ ಒತ್ತಾಯಿಸಿ ಇಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ ವತಿಯಿಂದ ಆನೇಕಲ್ ತಾಲ್ಲೂಕು ಪಂಚಾಯಿತಿ ಮುಂಬಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಇನ್ನು ಆನೇಕಲ್ ಪಟ್ಟಣದ ತಿಲಕ್ ಸರ್ಕಲ್ ನಿಂದ ಆನೇಕಲ್ ತಾಲ್ಲೂಕು ಪಂಚಾಯಿತಿ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಆನೇಕಲ್ ತಾಲ್ಲೂಕಿನಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ಹಣ ಇಲ್ಲದೆ ಯಾವುದೇ ಕೆಲಸಗಳು ಆಗುತ್ತಿಲ್ಲ ಹಾಗೂ ಬಡವರ ಮತ್ತು ದಲಿತರ ಸಮಸ್ಯೆಗಳನ್ನು ಕೇಳುವರಿಲ್ಲ. ನಾವು ಕಟ್ಟುವ ತೆರಿಗೆ ಹಣದಲ್ಲಿ ಬದುಕುತ್ತಿರುವ ಇಲಾಖೆ ಅದಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಅರಿತು ಪ್ರಾಮಾಣಿಕವಾಗಿ ಕೆಲಸ ಮಾಡಿ ಇಲ್ಲವಾದಲ್ಲಿ ಕುರ್ಚಿ ಕಾಲಿ ಮಾಡಿ ಎಂದು ಪ್ರತಿಭಟನಾ ಕಾರರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.
ಇನ್ನು ಪ್ರತಿಭಟನಾ ಸ್ಥಳಕ್ಕೆ ವಿಶೇಷ ತಹಶೀಲ್ದಾರ್ ಮತ್ತು ಆನೇಕಲ್ ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅದಿಕಾರಿ ಕೆ.ಮಂಜುನಾಥ್ ಆಗಮಿಸಿ ಪ್ರತಿಭಟನಾ ಕಾರರ ಮನವಿ ಸ್ವೀಕರಿಸಿ ಹಂತ-ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಇನ್ನು ಒಂದು ತಿಂಗಳ ಒಳಗಾಗಿ ನಮ್ಮೆಲ್ಲಾ ಬೇಡಿಕೆಗಳು ಈಡೇರಲಿಲ್ಲಾ ಅಂದರೆ ಜಿಲ್ಲಾ ಪಂಚಾಯಿತಿ ಕಚೇರಿ ಹಾಗೂ ಜಿಲ್ಲಾದಿಕಾರಿಗಳ ಕಚೇರಿ ಮುಂಬಾಗದಲ್ಲಿ ವಿಭಿನ್ನವಾಗಿ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯ ಪದಾದಿಕಾರಿಗಳು ಅದಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇನ್ನು ಪ್ರತಿಭಟನೆಯಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ ಗೂಳಿಮಂಗಲ ನಾಗಪ್ಪ. ಬ್ಯಾಟ್ ರಾಜ್. ಗೌತಮ್ ವೆಂಕಿ. ತಿರುಪಾಳ್ಯ ಮುನಿರಾಜು. ಯಡವನಹಳ್ಳಿ ಕೃಷ್ಣಪ್ಪ. ಪ್ರಜ್ವಲ್ ಜಿಗಣಿ ಶಂಕರ್. ಕೃಷ್ಣಪ್ಪ. ಸಕಲವಾರ ನಾರಾಯಣ್. ಮುನಿ ನಾರಾಯಣ್. ಭವಾನಿ ಪ್ರಸಾದ್. ಕ್ರಾಂತಿ ಗೋವಿಂದ್. ಡೇವಿಡ್. ಆದೂರು ಮದ್ದೂರಪ್ಪ. ಅರೇಹಳ್ಳಿ ಅಶ್ವಥ್. ಮಂಜುನಾಥ್. ಸಿ.ಕೆ.ರಾಮು. ಮಹೇಶ್ ಮತ್ತು ಸಮಿತಿಯ ಪದಾದಿಕಾರಿಗಳು ಹಾಗೂ ಸಾರ್ವಜನಿಕರು ಬಾಗವಹಿಸಿದ್ದರು.