ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಮಂಜುನಾಥಗೌಡ ನೇಮಕ ಮಾಡಿ ಆದೇಶ ಪ್ರತಿಯನ್ನು ನೀಡಲಾಗಿದೆ. ಬೆಂಗಳೂರಿನ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ನೂತನ ಅಧ್ಯಕ್ಷರಿಗೆ ಆದೇಶ ಪ್ರತಿಯನ್ನು ನೀಡಲಾಯಿತು. ಎಐಸಿಸಿ ವತಿಯಿಂದ ನೂತನ ಅಧ್ಯಕ್ಷರಾಗಿ ಮಂಜುನಾಥಗೌಡರವರನ್ನ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಅವರಿಗೆ ಆದೇಶ ಪ್ರತಿಯನ್ನು ಪಕ್ಷದ ವರಿಷ್ಠರು ಇಂದು ವಿತರಿಸಿದರು. ಮುಂಬರುವ ದಿನಗಳಲ್ಲಿ ಯೂತ್ ಕಾಂಗ್ರೆಸ್ ನ ಸಂಘಟಿಸಿ ಪಕ್ಷವನ್ನ ಮತ್ತಷ್ಟು ಬಲವರ್ಧನೆ ಮಾಡುವಂತೆ ಪಕ್ಷದ ವರಿಷ್ಠರು ಮಂಜುನಾಥ್ ರವರಿಗೆ ಸೂಚನೆಯನ್ನು ನೀಡಿದರು.
ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಂಜುನಾಥ್ ಗೌಡ ನೇಮಕ, ಬೆಂಗಳೂರಿನಲ್ಲಿ ಆದೇಶಪತ್ರ ನೀಡಿದ ಎಐಸಿಸಿ ವರಿಷ್ಠರು

