Breaking
4 Jun 2025, Wed

ಕಾಲೇಜಿನಿಂದ ಮರಳುತ್ತಿದ್ದ ತುಮಕೂರಿನ 19 ವರ್ಷದ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ತುಮಕೂರಿನ 19 ವರ್ಷದ ವಿದ್ಯಾರ್ಥಿನಿ ಮೈಥಿಲಿ ತೀವ್ರ ಹೃದಯಾಘಾತಕ್ಕೆ ಬಲಿಯಾದ ಘಟನೆ ನಡೆದಿದೆ. ತುಮಕೂರಿನ ಪಾವಗಡ ಪಟ್ಟಣದಲ್ಲಿ ಘಟನೆ ನಡೆದಿದೆ. ಶ್ರೀ ವೈ.ಈ ರಂಗಯ್ಯಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೊದಲ ವರ್ಷದ ಬಿಕಾಂ ಒದುತ್ತಿದ್ದ ಮೈಥಿಲಿ ಇಂದು ತರಗತಿ ಮುಗಿಸಿ ಮರಳುತ್ತಿದ್ದಾಗ ಹೃದಯಾಘಾತವಾಗಿದೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಇಂದು ಶ್ರೀ ವೈ.ಈ ರಂಗಯ್ಯಶೆಟ್ಟಿ ಕಾಲೇಜಿನಲ್ಲಿ ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ವಿದ್ಯಾರ್ಥಿನಿಗೆ ಹೃದಯಾಘಾತವಾಗಿದೆ. ಕುಸಿದು ಬಿದ್ದ ಮೈಥಿಲಿಯನ್ನು ಸಹಪಾಠಿಗಳು ಸೇರಿದಂತೆ ಸ್ಥಳೀಯರು ತಕ್ಷಣವೇ ಪಾವಗಡ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮದ್ಯದಲ್ಲೇ ಮೈಥಿಲಿ ಮೃತಪಟ್ಟಿದ್ದಾರೆ. ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಮಾಹಿತಿ ತಿಳಿದು ಕುಟುಂಬಸ್ಥರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಗಳನ್ನುಕಳೆದುಕೊಂಡ ಪೋಷಕರು ಆಸ್ಪತ್ರೆಯಲ್ಲೇ ಮಗಳನ್ನು ಬದುಕಿಸಿಕೊಡುವಂತೆ ವೈದ್ಯರ ಮುಂದೆ ಗೋಳಾಡಿದ್ದಾರೆ. ಇತ್ತ ಮೈಥಲಿ ಸ್ನೇಹಿತರು ಕಣ್ಣೀರು ಹಾಕಿದ್ದಾರೆ.

Leave a Reply