Breaking
21 Jul 2026, Tue

ಆನೇಕಲ್ ಪಟ್ಟಣದಲ್ಲಿ ಕೆಐಎಡಿಬಿ ವತಿಯಿಂದ ರೈತರ ಸಮಾಲೋಚನೆ ಸಭೆ ಆಯೋಜನೆ

ಆನೇಕಲ್ ತಾಲೂಕಿನ ಹಂದೇನಹಳ್ಳಿ ಸುತ್ತಮುತ್ತ ಕೆಐಎಡಿಬಿ ಭೂಸ್ವಾಧೀನ ಕುರಿತಂತೆ ಚರ್ಚೆ ನಡೆಸಲು ರೈತರ ಸಮಾಲೋಚನ ಸಭೆಯನ್ನು ಆಯೋಜಿಸಲಾಗಿತ್ತು. ಆನೇಕಲ್ ಪುರಸಭೆಯಲ್ಲಿ ರೈತರ ಸಮಾಲೋಚನಾ ಸಭೆಯನ್ನು ನಡೆಸಲಾಯಿತು. ಜಿಲ್ಲಾಧಿಕಾರಿಗಳಾದ ಜಗದೀಶ್ ಹಾಗೂ ಆನೇಕಲ್ ಶಾಸಕರಾದ ಶಿವಣ್ಣರವರ ನೇತೃತ್ವದಲ್ಲಿ ರೈತರ ಜೊತೆ ಸಮಲೋಚನೆ ಸಭೆಯನ್ನು ನಡೆಸಲಾಯಿತು. ಹಂದೇನಹಳ್ಳಿ ಸುತ್ತಮುತ್ತ ಸುಮಾರು ಒಂದು ಎಕರೆ ಕೃಷಿಯನ್ನು ಕೆ ಐ ಎ ಡಿ ಬಿ ಅಧಿಕಾರಿಗಳು ಭೂಸ್ವಾಧೀನ ಪಡೆದುಕೊಳ್ಳುವುದಕ್ಕೆ ಸಿದ್ಧತೆ ಮಾಡಿದ್ದಾರೆ. ಇದಕ್ಕೆ ರೈತರ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲಾಧಿಕಾರಿಗಳಾದ ಜಗದೀಶ್ ರವರ ನೇತೃತ್ವದಲ್ಲಿ ಈ ಒಂದು ಸಭೆಯನ್ನು ನಡೆಸಲಾಯಿತು.

Leave a Reply