ಆನೇಕಲ್ ತಾಲ್ಲೂಕಿನ ಬಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ತೆರವಾದ ಅಂಗವಾಗಿ
ಶುಕ್ರವಾರ ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅಂತಿಮವಾಗಿ ಮನೋದೇವಿ ಗಣೇಶ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಲಾಯಿತು.
ನೂತನ ಅಧ್ಯಕ್ಷರಾದ ಮನೋದೇವಿ ಗಣೇಶ್ ಮಾತನಾಡಿ ಎಲ್ಲಾ ಸದಸ್ಯರ ಸಹಕಾರದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ ಹಾಗಾಗಿ ಅವರ ನಂಬಿಕೆಗೆ ಚುತ್ತಿ ಬರದಂತೆ ನಡೆದು ಎಲ್ಲಾ ಸದಸ್ಯರನ್ನು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೇಗಿದುಕೊಂಡು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಮಾಣಿಕವಾಗಿ ಕೆಲಸ ಮಾಡಲಾಗುವುದು ಎಂದರು.ಇನ್ನು ಆಯ್ಕೆಗೆ ಸಹಕಾರಿಸಿದ ಎಲ್ಲಾ ಮುಖಂಡರಿಗೆ ಮತ್ತು ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಲಾಗುವುದು ಎಂದು ತಿಳಿಸಿದರು.
ಇನ್ನು ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಮನೋದೇವಿ ಅವರನ್ನು ಗ್ರಾಮ ಪಂ. ಸದಸ್ಯರಾದ
ಸುಪ್ರೀತ ಮುನಿರೆಡ್ಡಿ, ಶಿಲ್ಪ ಭಾಸ್ಕರ್, ಆಶೋಕ್ ರೆಡ್ಡಿ, ಕೇಬಲ್ ಮಂಜುನಾಥ್, ವಸಂತ್ ರೆಡ್ಡಿ, ಲತಾ ಗಣೇಶ್, ರೂಪವತಿ, ವೆಂಕಟೇಶ್, ಲಕ್ಷ್ಮಮ್ಮ, ನಾಗಣ್ಣ, ಮಂಜುನಾಥ್,ಮಧುಕುಮಾರ್, ಗಂಗಮ್ಮ, ವಿಜಯಕುಮಾರಿ. ಮಂಜುಳ, ಹಾಗೂ ಮುಖಂಡರಾದ ಬಳ್ಳೂರು ನಾರಾಯಣಸ್ವಾಮಿ, ಮಾರಪ್ಪ, ಮಂಜುನಾಥ್ ರೆಡ್ಡಿ, ಮುರಳಿ, ಕಿರಣ್, ಮುತ್ತುರಾಜು,ನಿಕೇತ್, ವೀರಭದ್ರಪ್ಪ, ಮುಂತಾದವರು,