ಆನೇಕಲ್ ಪೊಲೀಸ್ ಠಾಣೆಯಲ್ಲಿ ಮಾನವ ಹಕ್ಕು ಉಲ್ಲಂಘನೆ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರಿಂದ ದೂರು ಬಂದ ಹಿನ್ನೆಲೆಯಲ್ಲಿ ಠಾಣೆಗೆ ಮಾನವ ಹಕ್ಕುಗಳ ಡಿವೈಎಸ್ಪಿ ಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಂದಾಪುರ ಮೂಲದ ವಿಠಲ್ ಆಚಾರ್ಯ ಎಂಬುವರನ್ನು ಕಾನೂನುಬಾಹಿರವಾಗಿ ಠಾಣೆಗೆ ಕರೆತಂದು ಎರಡು ದಿನ ಕಳೆದರೂ FIR ದಾಖಲಿಸಿಲ್ಲ.
ಜೊತೆಗೆ ಹಣ ನೀಡುವಂತೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ವಿಠಲ್ ಪತ್ನಿ ದೂರು ನೀಡಿದ್ದಾರೆ. ಹೀಗಾಗಿ ಇಂದು ಡಿವೈಎಸ್ಪಿ ಮೋಹನ್ ಬೇಟಿ ನೀಡಿ ಠಾಣೆಯಲ್ಲಿದ್ದ ವಿಠಲ್ ರವರ ಜೊತೆ ಮಾತುಕತೆ ನಡೆಸಿದ್ದಾರೆ.
ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

