ಆನೇಕಲ್ ತಾಲೂಕಿನ ಬೇಗಿಹಳ್ಳಿ ಸಮೀಪವಿರುವ ಬೆಗಳಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಜಾತ್ರಾ ಮಹೋತ್ಸವ ಅಂಗವಾಗಿ ರಾಜ್ಯದ ವಿವಿಧ ಭಾಗಗಳಿಂದ ಮಂಗಳಮುಖಿಯರು ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರತಿ ವರ್ಷ ಬನ್ನೆರುಘಟ್ಟದಿಂದ ಕರಗ ಹೊತ್ತು ಕಾಲ್ನಡಿಗೆ ಮೂಲಕ ಬೆಗಳಮ್ಮ ದೇವಸ್ಥಾನಕ್ಕೆ ಬರುವ ಮಂಗಳಮುಖಿಯರು ದೇವಿಗೆ ವಿಶೇಷ ಪೂಜೆ ಸಲ್ಲಿಸುವ ವಾಡಿಕೆ ಹಲವು ವರ್ಷಗಳಿಂದ ರೂಢಿಯಲ್ಲಿದೆ. ಇಂದು ಹಲವು ಮಂಗಳ ಮುಖಿಯರು ಕರಗವನ್ನು ಹೊತ್ತುಕೊಂಡು ಸೇವೆಗೆ ವಿಶೇಷ ಪೂಜೆ ಸಲ್ಲಿಸಿದರು

