ವರದಕ್ಷಿಣೆ ನೀಡದ ಹಿನ್ನೆಲೆಯಲ್ಲಿ ವರನೊಬ್ಬ ಮದುವೆ ಮಂಟಪದಿಂದ ಪರಾರಿಯಾಗಿದ್ದಾನೆ. ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಘಟನೆ ನಡೆದಿದೆ. 30 ವರ್ಷದ ಪ್ರೇಮ್ ಚಂದ್ ಪರಾರಿಯಾದ ವರ. ಪ್ರೀತಿಸಿ ಮನೆಯವರನ್ನ ಒಪ್ಪಿಸಿ ಎಂದು ಮದುವೆಯಾಗುತ್ತಿದ್ದ ಪ್ರೇಮ್ ಚಂದ್ ಯುವತಿ ಮನೆಯವರಿಗೆ 50 ಲಕ್ಷ ವರದಕ್ಷಣೆ ನೀಡಬೇಕೆಂದು ಷರತ್ತು ಹಾಕಿದ್ದ. ಆದರೆ ಯುವತಿ ಮನೆಯವರು ವರದಕ್ಷಿಣೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮದುವೆ ಮಂಟಪದಿಂದ ವರಪರಾರಿಯಾಗಿದ್ದಾನೆ. ಈ ಸಂಬಂಧ ಪ್ರೇಮ್ ಚಂದ್ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ

