ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯದ ಸಮೀಪ ನೂತನವಾಗಿ ಯುಆರ್ ರಾವ್ ಭವನವನ್ನ ಲೋಕಾರ್ಪಣೆ ಮಾಡಲಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಖ್ಯಾತ ವಿಜ್ಞಾನಿ ಯು ಆರ್ ರಾವ್ ರವರ ಸವಿನೆನಪಿಗಾಗಿ ನೂತನ ಭವನವನ್ನ ನಿರ್ಮಿಸಿ ಎಂದು ಉದ್ಘಾಟನೆ ಮಾಡಲಾಯಿತು ಜೊತೆಗೆ ರಾಜ್ಯಮಟ್ಟದ ಸಂವಾದ ಹಾಗೂ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ ಮಾಡಲಾಯಿತು