ಜಿಗಣಿಯಲ್ಲಿ ವಿದ್ಯುತ್ ಕಂಬ ಏರಿ ಹುಚ್ಚಾಟ ಪ್ರದರ್ಶನ ಮಾಡಿದ್ದ ಯುವಕನನ್ನ ಜಿಗಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಹಾರ ಮೂಲದ ರಾಜು ಮುಂಡ ಎಂಬಾತ ರಸ್ತೆಯಲ್ಲಿ ನಿಂತಿದ್ದ ಶ್ರೀಧರ್ ಹಾಗೂ ಯೂನಿಸ್ ಎಂಬ ವ್ಯಕ್ತಿಗಳ ಮೇಲೆ ಕ್ಷುಲಕ ಕಾರಣಕ್ಕೆ. ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಹಿಡಿಯಲು ಬಂದ ಸಾರ್ವಜನಿಕರಿಂದ ತಪ್ಪಿಸಿಕೊಂಡು ವಿದ್ಯುತ್ ಕಂಬ ಏರಿದ್ದಾನೆ. ಬಳಿಕ ಸ್ಥಳಕ್ಕೆ ಬಂದ ಜಿಗಣಿ ಪೊಲೀಸರು ರಾಜು ಮುಂಡ ಎಂಬ ಯುವಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

