Breaking
10 Feb 2026, Tue

ಮಹಾಲಕ್ಷ್ಮಿಪುರಂ ಬಳಿ ₹30 ಲಕ್ಷ ವೆಚ್ಚದಲ್ಲಿ ಕರಿಮಾರಿಯಮ್ಮ ದೇವಾಲಯ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಗೋಪಾಲಯ್ಯ ರಿಂದ ಭೂಮಿ ಪೂಜೆ

ಮಹಾಲಕ್ಷ್ಮಿಪುರಂ ಸಮೀಪವಿರುವ ಕರಿ ಮಾರಿಯಮ್ಮ ದೇವಾಲಯ ಮುಂಭಾಗ 30 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶಾಸಕ ಗೋಪಾಲಯ್ಯ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಇತ್ತೀಚಿಗೆ ರಸ್ತೆ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅನಾನುಕೂಲ ಉಂಟಾಗುತ್ತಿತ್ತು. ಅಲ್ಲದೇ ರಸ್ತೆಗಳಲ್ಲಿ ಗುಂಡಿಗಳಾಗಿ ಅಪಘಾತಗಳು ಸಂಭವಿಸಿತ್ತು. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ನೂತನವಾಗಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ

Leave a Reply