Breaking
9 Jun 2025, Mon

ವರ್ತೂರು ಕೆರೆಯಲ್ಲಿ 3 ಸಾವಿರ ಗಿಡ ನೆಡುವ ಕಾರ್ಯಕ್ರಮ, ಶಾಸಕಿ ಮಂಜುಳಾ ಚಾಲನೆ

ಮಹದೇವಪುರ ವಿಧಾನಸಭಾ ಕ್ಷೇತ್ರದ ವರ್ತೂರು ಕೆರೆಯಲ್ಲಿ ಮೂರು ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೇಟ್ರೀಸ್ ಸಂಸ್ಥೆ ವತಿಯಿಂದ ಆಯೋಜನೆಯಾಗಿದ್ದ ಕಾರ್ಯಕ್ರಮವನ್ನ ಶಾಸಕಿ ಮಂಜುಳಾ ಲಿಂಬಾವಳಿ ಉದ್ಘಾಟಿಸಿದರು. ಇತ್ತೀಚೆಗೆ ವರ್ತೂರು ಸುತ್ತಮುತ್ತ ಕೈಗಾರಿಕೆಗಳ ಪ್ರಭಾವದಿಂದ ಪರಿಸರ ಮಲ್ಲಿನವಾಗುತ್ತಿದೆ. ಹೀಗಾಗಿ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕೆರೆಯ ಅಕ್ಕ ಪಕ್ಕದಲ್ಲಿ 3 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಸಲಾಯಿತು. ನೂರಾರು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಬಂದು ಗೀಡ ನೆಟ್ಟರು..

Leave a Reply