ಆನೇಕಲ್ ಪಟ್ಟಣದಲ್ಲಿ ಯುವಕನ ಕಿಡ್ನಾಪ್ ಮಾಡಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಸಿದ್ದಾರ್ಥ ಹಾಗೂ ದರ್ಶನ್ ಬಂದಿದ್ದ ಆರೋಪಿಗಳು. ಮುರಳಿ ಎಂಬ ಯುವಕನನ್ನ ಕಿಡ್ನಾಪ್ ಮಾಡಿ ನಾಲ್ವರು ದುಷ್ಕರ್ಮಿಗಳು ಅವನ ಬಳಿ ಇದ್ದ ಮೊಬೈಲ್ ಹಾಗೂ ದ್ವಿಚಕ್ರ ವಾಹನವನ್ನು ಕದ್ದು ನಾಲ್ವರು ಪರಾಧಿಯಾಗಿದ್ದರು.
ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ. ಇನ್ನುಳಿದ ಅನಿಲ್, ಶಂಶಾಕ್ ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ

