Breaking
4 Jun 2025, Wed

ದೃಷ್ಟಿ ತೆಗೆದ ನೀರು ರಸ್ತೆಗೆ ಚೆಲ್ಲಿದಕ್ಕೆ ವ್ಯಕ್ತಿಯ ಮೇಲೆ ಮಹಿಳೆಯರ ಹಲ್ಲೆ, ಹಲ್ಲೆಯಾದ ವ್ಯಕ್ತಿ ಸಾವು

ದೃಷ್ಟಿ ತೆಗೆದ ನೀರನ್ನು ರಸ್ತೆಯಲ್ಲಿ ಚೆಲ್ಲಿದ ವ್ಯಕ್ತಿಯ ಮೇಲೆ ಮಹಿಳೆಯರ ಗುಂಪು ಹಲ್ಲೆ ಮಾಡಿದ ಪರಿಣಾಮ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಆನೇಕಲ್ ತಾಲೂಕಿನ ದೊಡ್ಡ ಹಾಗಡೆ ಗ್ರಾಮದಲ್ಲಿ ಘಟನೆ ನಡೆದಿದೆ. ರಾಮಚಂದ್ರಪ್ಪ ಸಾವನ್ನಪ್ಪಿರುವ ದುರ್ದೈವಿ. ದೃಷ್ಟಿ ತೆಗೆದು ನೀರನ್ನ ರಸ್ತೆಯಲ್ಲಿ ಹಾಕುತ್ತಿದ್ದ ವೇಳೆ ಮಹಿಳೆಯರ ಗುಂಪು ಈತನ ಮೇಲೆ ಹಲ್ಲೆ ಮಾಡಿದೆ. ಹಲ್ಲೆಯಿಂದ ರಾಮಚಂದ್ರಪ್ಪ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಅವರನ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಆದರೆ ರಾಮಚಂದ್ರಪ್ಪ ಸಾವನ್ನಪ್ಪಿರೋದಾಗಿ ವೈದ್ಯರು ದೃಢಪಡಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಮಹಿಳೆಯರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ

Leave a Reply