ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬೇಸಿಗೆಯ ಶಾಖದ ನಡುವೆ ಮೃಗಾಲಯದ ಪ್ರಾಣಿಗಳಿಗೆ ತಂಪಾದ ಮಂಜುಗಡ್ಡೆ ಮಾದರಿಯಲ್ಲಿ ಆಹಾರವನ್ನು ನೀಡಲಾಗುತ್ತಿದೆ.
ಪ್ರಾಣಿಗಳಿಗೆ ನೀಡುವ ಹಣ್ಣು ತರಕಾರಿಗಳನ್ನು ಫ್ರೀಜ್ ಮಾಡಿ ಅವುಗಳಿಗೆ ನೀಡುತಿರುವುದರಿಂದ ಪ್ರಾಣಿಗಳು ತಂಪಾದ ಆಹಾರವನ್ನು ಖುಷಿಖುಷಿಯಾಗಿ ಸೇವನೆ ಮಾಡುತ್ತಿವೆ.
ಇನ್ನು ಕೆಲವು ಪ್ರಾಣಿಗಳಿಗೆ ಐಸ್ ಕ್ಯಾಂಡಿ ಮಾದರಿಯಲ್ಲಿ ಆಹಾರ ವಿತರಿಸಲಾಗುತ್ತಿದೆ. ಬೇಸಿಗೆಯ ನಡುವೆಯೂ ಪ್ರಾಣಿಗಳನ್ನು ತಂಪಾಗಿರಿಸಲು ಮೃಗಾಲಯದ ಅಧಿಕಾರಿಗಳು ಈ ರೀತಿಯ ಪ್ಲಾನ್ ರೂಪಿಸಿದ್ದಾರೆ.
ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..