Breaking
9 Jun 2025, Mon

ಭೈರವೇಶ್ವರ ನಗರ ಹಾಗೂ ಶಿರ್ಕೆ ಬಡಾವಣೆಗೆ ನೂತನ ಬಿಎಂಟಿಸಿ ಬಸ್ ಚಾಲನೆ ನೀಡಿದ ಶಾಸಕ S T ಸೋಮಶೇಖರ್

ಯಶವಂತಪುರ ವಿಧಾನಸಭಾ ಕ್ಷೇತ್ರ ಕೆಂಗೇರಿ ಹಾಗೂ ನಾಗದೇವನಹಳ್ಳಿ ವಾರ್ಡ್ ವ್ಯಾಪ್ತಿಯ ಭೈರವೇಶ್ವರನಗರ ಹಾಗೂ ಶಿರ್ಕೆ ಬಡಾವಣೆಗಳ ಮಾರ್ಗವಾಗಿ ಸಮೀಪದ ಮೆಟ್ರೋ ನಿಲ್ದಾಣಗಳು, ಮೆಜೆಸ್ಟಿಕ್ ಹಾಗೂ ಕೆ.ಆರ್ ಮಾರ್ಕೆಟ್ ಸ್ಥಳಗಳಿಗೆ ನೂತನ ಬಿಎಂಟಿಸಿ ಬಸ್‌ ಸಂಚಾರ ಪ್ರಾರಂಭಿಸಿದ್ದು, ಇಂದು ಬೆಳಿಗ್ಗೆ ಪೂಜೆ ಸಲ್ಲಿಸುವ ಮೂಲಕ ನೂತನ ಮಾರ್ಗದ ಬಸ್ಸುಗಳಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಬ್ಲಾಕ್ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಹಿರಿಯ ಮುಖಂಡರುಗಳು, ಭೈರವೇಶ್ವರನಗರ ಬಡಾವಣೆಯ ನಿವಾಸಿಗಳು, ಬಿಎಂಟಿಸಿ ಅಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply