Breaking
21 Jul 2026, Tue

ಕೆರೆಯಲ್ಲಿ ಕಸ ಸುರಿಯುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದ ಪುರಸಭೆಯ ಸಿಬ್ಬಂದಿ

ಆನೇಕಲ್‌ ತಾಲೂಕಿನ ಜಿಗಣಿ ಕೆರೆಯಲ್ಲಿ ಅಕ್ರಮವಾಗಿ ಕಸ ತಂದು ಸುರಿಯುತ್ತಿದ್ದ ವಾಹನಗಳನ್ನು ಜಿಗಣಿ ಪುರಸಭೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಕೆರೆಯ ಪಕ್ಕದಲ್ಲೇ ರಾಶಿ ರಾಶಿ ಕಸವನ್ನ ತಂದು ಸುರಿಯುತ್ತಿದ್ದು ಇದರಿಂದ ಕೆರೆ ಸಂಪೂರ್ಣವಾಗಿ ಹಾಳಾಗುತ್ತಿದೆ.

ಇಂದು ವಾಹನಗಳಲ್ಲಿ ರಾಶಿ ರಾಶಿ ಕಸ ತಂದು ಸುರಿಯುತ್ತಿದ್ದ ಬಗ್ಗೆ ಸ್ಥಳಿಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪುರಸಭೆಯ ಸಿಬ್ಬಂದಿ ಮೂರು ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿ ಕಸ ಹಾಕಿದರೆ ದಂಡ ವಿಧಿಸುವುದಾಗಿ ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply