ಎಲ್ಲಾದಕ್ಕಿಂತ ಮಿಗಿಲಾಗಿದ್ದು ಸ್ನೇಹ ಸಂಬಂಧ ಆ ಸಂಬಂಧಕ್ಕೆ ಒಬ್ಬ ಚುತಿ ತಂದಿದ್ದಾನೆ ಇಲ್ಲೊಬ್ಬ ಸ್ನೇಹಿತ ರಾಜಿ ಮಾಡಿಸಲು ಕರೆಸಿಕೊಂಡು ಅತನಿಗೆ ಚಟ್ಟ ಕಟ್ಟಲು ಮುಂದಾಗಿದ್ದಾನೆ ಈ ಫೋಟೋದಲ್ಲಿ ಕಾಣ್ತಿದಿರಲ್ಲ ಕ್ರಿಮಿಗಳನ್ನ ಒಮ್ಮೆ ನೋಡ್ಬಿಡಿ..ಮುನಿಯಲ್ಲಪ್ಪ ಅಲಿಯಸ್ ಕರಿಯ ಅಂತ ಈತನ ಗ್ಯಾಂಗ್ ಅಶೋಕ್, ಮೂರ್ತಿ, ಆನಂದ್ ,ಪ್ರಶಾಂತ್, ಚಂದ್ರ ಹಾಗು ಕರಿಯನ ಮಗ ದರ್ಶನ್, ಸೇರಿದಂತೆ ಮಾರಕಸ್ತ್ರದಿಂದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ ..ಇನ್ನು ಇವೆರಲ್ಲಾ ಪೆನ್ನು ಬುಕ್ಕು ಹಿಡಿದು ಓದೋ ಟೈಮಲ್ಲಿ ಮಚ್ಚು ಲಾಂಗು, ಡ್ರ್ಯಾಗರ್ ಹಿಡಿದು ನೆನ್ನೆ ರಾತ್ರಿ ಮಾರಕಾಸ್ತ್ರಗಳಿಂದ ಸತೀಶ್ ಎಂಬಾತನ ಮೇಲೆ ಹಲ್ಲೇ ಮಾಡಿದ್ದಾರೆ.. ಇನ್ನು ಹೇಗೆ ಬೆಡ್ ಮೇಲೆ ಮಲಗಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಹೆಸರು ಸತೀಶ್ ಅಂತ ಮುತ್ತನಲ್ಲೂರು ಗ್ರಾಮದ ನಿವಾಸಿ .. ಸತೀಶ್ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆನೇಕಲ್ ತಾಲೂಕಿನ ಮುತ್ತನಲ್ಲೂರು ಗ್ರಾಮದ ಕ್ರಾಸ್ ನಲ್ಲಿ ವಾಸವಾಗಿದ್ದ ನೆನ್ನೆ ಹಬ್ಬದ ಕಾರಣಕ್ಕೆ ಹುಣಸೆ ಬೀಜ ಆಟವನ್ನ ನೋಡದಿಕ್ಕಂತ ಹೋಗಿದ್ರಂತೆ ಆ ಜಾಗದಲ್ಲಿ ಬೇರೆ ಒಬ್ಬರಿಗೆ ಗಲಾಟೆ ಆಗಿತ್ತಂತೆ ಅದನ್ನ ಗಲಾಟೆಯನ್ನು ನಿಲ್ಲಿಸಿ ಇಬ್ಬರಿಗೂ ಸಮಾಧಾನ ಮಾಡಿ 3:00ಗೆ ಮನೆಗೆ ಹೋಗಿದ್ರಂತೆ, ಅದನ್ನೇ ಮನಸ್ಸಿನಲ್ಲಿ ಇಟ್ಕೊಂಡಿದ್ದ ಮುನಿಯಲ್ಲಪ್ಪ ಅಲಿಯಾಸ್ ಕರಿಯ ರಾತ್ರಿ ಎಂಟು ಗಂಟೆಗೆ ಸತೀಶ್ ಮುತ್ತನಲ್ಲೂರು ಸಮೀಪದ ಗೋಪ್ಸಂದ್ರ ಅಂಬೇಡ್ಕರ್ ಪ್ರತಿಮೆ ಕಡೆಗೆ ಬಂದು ಬೈಕ್ ನಿಲ್ಲಿಸಿದಾಗ ಮುನಿಯಲ್ಲಪ್ಪ ಅಲಿಯಾಸ್ ಕರಿಯ ಗ್ಯಾಂಗ್ ಮಾರಕಸ್ತ್ರಗಳಿಂದ ಅಟ್ಯಾಕ್ ಮಾಡಿದ್ದಾರೆ ಎಂದು ಸತೀಶ್ ಪತ್ನಿ ಪುಪ್ಷ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ..
ಇನ್ನು ಗಂಡ ಸತೀಶ್ ಒಬ್ರೇ ಹೋಗ್ತಾರೆ ಅಂತ ಪತ್ನಿ ಪುಷ್ಪ ಮಗ ಪ್ರಜ್ವಲ್ ನನ್ನ ಅಪ್ಪನ ಜೊತೆ ಹೋಗ್ಬಿಟ್ ಬಾ ಅಂತ ಹೇಳಿದ್ರಂತೆ ನಂತರ 10 ಗಂಟೆ ಸುಮಾರಿಗೆ ತಂದೆಗೆ ಹೊಡೆದು ಬಿಟ್ಟಿದ್ದಾರೆ ಅಂತ ಬಂದು ಮನೆಗೆ ಮಗ ಹೇಳಿದ್ರಂತೆ, ಸದ್ಯ ಗಾಯಾಗಳಿಂದ ಕೂಡಿದ್ದ ಸತೀಶ್ ರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ರಂತೆ. ಹೆಚ್ಚಿನ ಚಿಕತ್ಸೆಗಾಗಿ ಚಂದಾಪುರದ ನಾರಾಯಣ ಹೃದಯಾಲಯಕ್ಕೆ ದಾಖಲು ಮಾಡಿದ್ದಾರೆ.. ಇನ್ನು ಮುನಿಯಲ್ಪಪ್ಪ ಅಲಿಯಾಸ್ ಕರಿಯ ಹಿನ್ನೆಲೆ ನೋಡೋದಾದ್ರೆ ಈತನ ವಿರುದ್ಧ ಅನೇಕ ಪೊಲೀಸ್ ಠಾಣೆಗಳಲ್ಲಿ ದರೋಡೆ ಕಳ್ಳತನ ಸೇರಿದಂತೆ ಅನೇಕ ಕೇಸುಗಳು ದಾಖಲಾಗಿದೆ.. ಸದ್ಯ ಹಲ್ಲೆ ಮಾಡಿದ ಆರೋಪಿಗಳು ಎಸ್ಕೇಪ್ ಆಗಿದ್ದಾರೆ..
ನ್ನು ಇಂತಹ ಕ್ರಿಮಿಗಳನ್ನ ಮಟ್ಟ ಹಾಕದೆ ಹೋದರೆ ಮುಂದಿನ ದಿನಗಳಲ್ಲಿ ಸಮಾಜಘಾತಕ ಕೃತ್ಯಗಳಲ್ಲಿ ಭಾಗಿಯಾಗ್ತಾರೆ..
ಸದ್ಯ ಸೂರ್ಯನ ನಗರ ಪೊಲೀಸರು ಕುಟುಂಬಸ್ಥರ ಜೊತೆಗೆ ಮಾತುಕತೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ . ಒಟ್ನಲ್ಲಿ ಹಳೆ ದ್ವೇಷಕ್ಕೆ ಹಲ್ಲೆ ಮಾಡಿದ್ದಾರೆ ಎಂಬುದನ್ನು ಪೊಲೀಸರು ತನಿಖೆಯಲ್ಲಿ ತಿಳಿಯಬೇಕಾಗಿದೆ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ. ಈ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..